ಆಂಧ್ರದ ಶೇಷಾಚಲಂ ಅರಣ್ಯದಲ್ಲಿ ವಿಜಯನಗರ ಸಾಮ್ರಾಜ್ಯದ ಮಹತ್ವದ ಶಾಸನಗಳು ಪತ್ತೆ

ಆಂಧ್ರಪ್ರದೇಶದ ತಿರುಮಲ ಬೆಟ್ಟಗಳನ್ನು ಒಳಗೊಂಡಿರುವ ಶೇಷಾಚಲಂ ಅರಣ್ಯ ವಲಯದಲ್ಲಿ (Seshachalam Forests) ವಿಜಯನಗರ ಸಾಮ್ರಾಜ್ಯದ (Vijayanagara Empire) ಕಾಲದ ಅತ್ಯಂತ ಅಪರೂಪದ ಐತಿಹಾಸಿಕ ಪುರಾವೆಗಳು ಮತ್ತು ಶಿಲ್ಪಕಲೆಗಳು ಪತ್ತೆಯಾಗಿವೆ. ಇತಿಹಾಸ ಸಂಶೋಧಕರು ಮತ್ತು ಪುರಾತತ್ವ ಇಲಾಖೆಯ ವಿಜ್ಞಾನಿಗಳು ನಡೆಸಿರುವ ಅನ್ವೇಷಣೆಯಲ್ಲಿ ಈ ಮಹತ್ವದ ವಿಷಯ ಬೆಳಕಿಗೆ ಬಂದಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಅಭಯಾರಣ್ಯಗಳಲ್ಲಿ ಅಡಗಿರುವ ಐತಿಹಾಸಿಕ ಸಂಪತ್ತನ್ನು ಬಯಲು ಮಾಡಲು ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ನಲ್ಲಮಲ, ಲಂಕಮಲ ಮತ್ತು ಶೇಷಾಚಲಂ ಕಾಡುಗಳಲ್ಲಿ ಸಮೀಕ್ಷೆ ನಡೆಸುತ್ತಿದೆ.

ಭಾರತೀಯ ಪುರಾತತ್ವ ಸಮೀಕ್ಷೆ ನಡೆಸಿದ ಸಮೀಕ್ಷೆಯಲ್ಲಿ 16ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಅಪರೂಪದ ಶಾಸನಗಳು ಪತ್ತೆಯಾಗಿವೆ. ಸದಾಶಿವಕೋಣ ಪ್ರದೇಶದ ಬಂಡೆಗಳ ಮೇಲೆ ತೆಲುಗು, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಕೆತ್ತಿದ ಶಾಸನಗಳನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಈ ಶಾಸನಗಳಲ್ಲಿ ಗುಡಿಮಲ್ಲಂ ಶ್ರೀ ಪರುಶರಾಮೇಶ್ವರ ಸ್ವಾಮಿ ದೇವಸ್ಥಾನಕ್ಕೆ ಪುಷ್ಕರಿಣಿ ನಿರ್ಮಾಣದ ವಿವರಗಳಿವೆ ಎನ್ನಲಾಗಿದೆ.

spot_img
- Advertisement -spot_img
- Advertisement -spot_img
- Advertisement -spot_img

Related Articles

Stay Connected

347,000FansLike
122,000FollowersFollow
193,000SubscribersSubscribe
spot_img

Latest Articles